ಯಾರು….?

ನನ್ನ ಹಾದಿಯಲ್ಲಿ ಹೂವ ಚೆಲ್ಲಿ
ಸ್ವರ್ಗದ ದಾರಿಯನು
ಸುಗಮ ಗೊಳಿಸಿದವರಾರು?

ಮೇಲೆ ಮೇಲೆ
ನೀಲ ಗಗನಕ್ಕೇರಿಸಿ
ಮಿನುಗುವ ತಾರೆ ಮಾಡಿದವರಾರು?

ಈ ಹಕ್ಕಿಗೆ ಗುಟುಕನು ಕೊಟ್ಟು
ಗೂಡ ಬಿಟ್ಟು ಮೇಲೆ ಹಾರಲು
ರೆಕ್ಕೆಗಳಿಗೆ ಬಲವ ತುಂಬಿದವರಾರು?

ಪ್ರೀತಿ ವಾತ್ಸಲ್ಯದಿಂದ
ನಾಳೆಗಾಗಿ ಬೆಳಕ ಚೆಲ್ಲಿ
ಕಿರಣ ಮಾಲೆಯಲ್ಲಿ ನನ್ನ ಸೇರಿಸಿದವರಾರು?

ಈ ಕೊರಳಿಗೆ ಚಿಲಿಪಿಲಿ ಸ್ವರವ ತುಂಬಿ
ನಾ ಹಾಡುವ ಹಾಡಿಗೆ
ರಾಗ ಮಾಲಿಕೆ ಕಟ್ಟಿದವರಾರು?

ನಾಡು ನುಡಿಗಾಗಿ
ಎನ್ನ ಹೃದಯ ಸದಾ
ಮಿಡಿಯುವಂತೆ ಚೈತನ್ಯ ತುಂಬಿದವರಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಧ್ಯವಯಸ್ಸು
Next post ಅವನೊಬ್ಬನನ್ನೇ ಬಿಟ್ಟು ಹೋದ ರಾತ್ರಿ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys